ಬ್ರಹ್ಮಾವರ: ಯಕ್ಷಸಂಭ್ರಮ, ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 22 , 2015
|
ಜನವರಿ 22, 2015
|
ಬ್ರಹ್ಮಾವರ: ಯಕ್ಷಸಂಭ್ರಮ, ಸಮ್ಮಾನ
ಬ್ರಹ್ಮಾವರ :
ವಿಶ್ವ ಹಿಂದೂ ಪರಿಷತ್-ಬಜರಂಗ ದಳ ಬ್ರಹ್ಮಾವರ ಪ್ರಖಂಡದ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ವರ್ಣ ಜಯಂತಿ ಪ್ರಯುಕ್ತ ನೀಲಾವರ ಮೇಳದವರಿಂದ 3 ದಿನಗಳ ಯಕ್ಷ ಸಂಭ್ರಮ ಕಾರ್ಯಕ್ರಮ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಮಂಗಳವಾರ ಉದ್ಘಾಟನೆಗೊಂಡಿತು.
ಉದ್ಯಮಿ ಸುದರ್ಶನ್ ಹೆಗ್ಡೆ ಬ್ರಹ್ಮಾವರ ಉದ್ಘಾಟಿಸಿದರು. ಅತಿಥಿಗಳಾಗಿ ಯಡಾಡಿ ಕರುಣಾಕರ ಶೆಟ್ಟಿ, ಹಾರಾಡಿ ದಯಾನಂದ ಶೆಟ್ಟಿ, ಆನಂದ ಮಟಪಾಡಿ, ರಘುರಾಮ್ ಗಾಣಿಗ ಬೈಕಾಡಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಟಪಾಡಿ ಶ್ರೀ ನಂದಿಕೇಶ್ವರ ಯಕ್ಷಗಾನ ಸಂಘದ ಪರವಾಗಿ ಸ್ಯಾಮ್ಸನ್ ಸಿಕ್ವೇರ, ಬೈಕಾಡಿ ಶ್ರೀ ಬೈಕಾಡ್ತಿ ಅಮ್ಮನವರ ಯಕ್ಷಗಾನ ಸಂಘದ ಪರವಾಗಿ ವಿಶ್ವರೂಪ ಮಧ್ಯಸ್ಥ, ಆರೂರು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಪರವಾಗಿ ಗುರುರಾಜ್ ರಾವ್, ಉಪ್ಪೂರು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಪರವಾಗಿ ನಾಗರಾಜ ಶಾಸ್ತಿ, ಹೇರೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಪರವಾಗಿ ಉದಯ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ, ಗುಣಶೀಲ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ಪ್ರಖಂಡದ ಪದಾಧಿಕಾರಿಗಳು ಸಹಕರಿಸಿದರು.
ಕೃಪೆ :
http://udayavani.com
|
|
|